ಗಾಂಜಾಡಾಲಿ

ನಾ ಅಭಿಮಾನಿ
ನಾ ಭಾಽಳ ಸ್ವಾಭಿಮಾನಿ
ಯಾರಿಗೂ ಸೊಪ್ಪ ಹಾಕೋ
ಮಗ ನಾ ಅಲ್ಲ, ಅಂತಿದ್ಯಲ್ಲೊ…..?
ನಂದೂ ನಮ್ಮಪ್ಪಂದೂ ಮಾತ ಅಂದ್ರ
ಯಾವನೂ ಅಡ್ಡ ಹಾಕಾಕಿಲ್ಲ ಮಗ,
ಅಷ್ಟ ಅಲ್ಲೋಲೇಽ
ಯಾವ ಮಿನಿಸ್ಟ್ರೂ ಹೇಳಿದ್ಹಂಗ
ಕೇಳ್ತಾನ. ಯಾವ
ಬಡ್ಡಿ ಮಕ್ಕಳದೇನಂತ ಅಂತಿದ್ಯಲ್ಲೋ…..?
ಈಗ್ಯಾಕೋ
ನಿಂತ ನಿಂತಲ್ಲೇ
ಕುಂತ ಕುಂತಲ್ಲೇ
ಕೆಸರಾಗ, ಕಸದ ಗುಂಡ್ಯಾಗ ಬೀಳಾಕ್ಹತ್ತಿ
ಕಣ್ಣ್ಯಾಕ ತೇಲಕ್ಹತ್ಯಾವು
ಕುತಿಗ್ಯಾಕ ಬೀಳ್ಯಾಕ್ಹತ್ತೇತಿ
ಏನೋ ಸಮಾಚಾರ –
“ಅಫೀಮ್, ಗಾಂಜಾ, ಡಾಲಿ…..
ರೀನಾ, ಸು‍ಷುಮಾ, ಸರಿತಾ …. ”
ಅಲಽಲಽಲಽ ದೂರ ಹೋಗಿದಿಪಾ
ಬಾಯಿ ತೊದಲಾಕ್ಹತ್ತತಿ ಸಾಽಕ ಸಾಽಕ
ಇವ್ರ ಇರಬೇಕು
ನಿಂದು ನಿಮ್ಮಪ್ಪಂದು ಮಿನಿಷ್ಟ್ರುಗಳು
ಹೇಳಿದ್ಹಾಂಗ ಕೇಳಾವ್ರು
ನಿನ್ನ ಸ್ವಾಭಿಮಾನಕ ಕಿಮ್ಮತ್ತ ಕೊಡಾವ್ರು
ಭಲೇ ಭೇಷ್
ಗಾಂಜಾದ ಪ್ರತಿನಿಧಿಗೆ….. ಲೀ
ರೀನಾ ಡಾಲಿಗೆ…. ಲೀ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲನಾಗಗಳೊಡಲು ಜಗದ ಮನ
Next post ಲಿಂಗಮ್ಮನ ವಚನಗಳು – ೩೦

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys